Wednesday, November 28, 2012

Nimage Sittu Baralva?



ನಿಮಗೆ ಸಿಟ್ಟು ಬರಲ್ವಾ?

ಇತ್ತಿಚೆಗೆ ಎಲ್ರು ಕೇಳ್ತಿದ್ದಾರೆ, ಯಾಕೆ ಬರಿತ್ತಿದ್ದಿಯಾ ಅಂತ? ಫೇಸ್ಬುಕ್ ಮೇಲೆ ಬರಿ ಪಾಲಿಟಿಕ್ಸ್, ಸ್ವದೇಶಿ ಆಂದೋಲನ, ಗೋರಕ್ಷ....ಇತ್ಯಾದಿ ಬಗ್ಗೆ ಬರಿತಿಯ ಯಾಕೆ? ನೀನು ಬರಿತಿರುವ ತಾಪಿಕ್ಸ್ ಡಿಫರೆಂಟ್ ಹಾಗು ಕುತೂಹಲವಾಗಿರುತ್ತದೆ. ದೇಶ ಕೆಟ್ಟಹೋಗಿದೆ, ಇದು ಕಲಿಯುಗ ಯಾರು ಸರಿಮಾಡ್ಲಾರರು ಅಂತ ಹಿಂಗೆಲ್ಲ ಹೇಳ್ತಾರೆ. ಕೈ ಕಟ್ಟಿ ಕುಳಿತುಕೊಳ್ಳೋ ಜನ ಇರೋವರೆಗೂ, ಈ ದೇಶ ಉದ್ದಾರ ಆಗೋಲ್ಲ. ಸಿಟ್ಟು ಬರೋಕೆ ಕಾರಣಗಳೇನು?


೧. ಚಿಕ್ಕೊರಿರುವಾಗ ಶಾಲೆಯಲ್ಲಿ ಜನ ಗಣ ಮನ , ಸುಜಲಾಂ ಸುಫಲಾಂ ಅಂತ ಹಾಡಿದ್ದೇಕೆ. ಟೈಮ್ ಪಾಸ್ಗಾ?


೨. ಇದು ನನ್ನ ದೇಶ. ಕಾಶ್ಮೀರದಿಂದ ಹಿಡಿದು ಕನ್ಯಕುಮಾರಿಯವರೆಗೂ, ಗುಜರಾತದಿಂದ ಹಿಡಿದು ಅಸ್ಸಾಂ, ಅರುಣಾಚಲ್ ವರೆಗೂ, ಅದು ಭಾರತ ದೇಶ ಅಂತ ಓದ್ಸಿದ್ರಲ್ಲಾ ಶಾಲೆಯಲ್ಲಿ? ಇವಾಗ ಕಾಶ್ಮೀರ ಅರ್ಧ ತುಂಡು ಪಾಕಿಸ್ತಾನಕ್ಕೆ ನೀಡಿದ್ದೇವೆ, ಅರುಣಾಚಲವನ್ನು ಚೀನಾ ತನ್ನದೆಂದು ತಿಳಿದು ಅಲ್ಲಿ ರಾಜಾರೋಷವಾಗಿ ಓಡಾಡಿ ಬರುತ್ತಾರೆ. ಹೀಗೆ ಅದಾಗ ನಮಗೆ ಯಾಕೆ ಸಿಟ್ಟು ಬರಬಾರದು, ನಾನು ಯಾಕೆ ಬರಿಬಾರ್ದು. ಸತ್ಯವನ್ನು ತಿಳಿಸಲ್ಲಿಕ್ಕೆ ನಾನು ಬರಿತೀದ್ದೇನೆ.


೩. ಬ್ರಿಟಿಶರು ನಮ್ಮನ್ನು ಲೂಟಿ ಮಾಡಿದ್ರು, ನಮ್ಮಹುತಾತ್ಮರನ್ನು ನಾಯಿಗೆ ಹೊಡದಂಗೆ ಹೊಡ್ದು, ಗಲ್ಲಿಗೇರಿಸಿದ್ರಲ್ಲಾ, ನಾವು ಅದನ್ನು ಮರೆತು ಇನ್ನು ಅವರ ಪಾದ ಸೇವೆ ಮಾಡ್ತ್ಹಿದ್ದಿವಿ. ಯಾಕೆ? ನಮ್ಮ ದೇಶವನ್ನು ಕೊಳ್ಳೆಹೊಡದು, ನಮ್ಮ ದೇಶವನ್ನು ಇಬ್ಬಾಗ ಮಾಡಿ, ಬಡತನ ತಂದಿಟ್ಟು, ಜಾತಿ ದ್ವೇಷ ಚುಚ್ಚನ್ನು ಹೊತ್ತಿಸಿಹೊದ್ರಲ್ಲಾ. ಬ್ರಿಟನ್ ಮಹಾರಾಣಿಯನ್ನು ಕಾಮನ್ ವೆಲ್ತ್ ಗಮ್ಸೆಗೆ ಮುಖ್ಯ ಅಥಿತಿಯನ್ನಾಗಿ ಕರೆದ್ರಲ್ಲಾ ಯಾಕೆ. ಆವರಿಗೆ ನಾವು ಇನ್ನು ಯಾಕೆ ಮಣೆ ಹಾಕ್ತೀವಿ?


೪. ಬ್ರಿಟಿಶರು ಇಲ್ಲಿ ಬರಿ ನಮ್ಮ ಸಂಪತ್ತು ಲೂಟಿಮಾಡೋದಲ್ಲದೆ, ನಮ್ಮ ಸಂಸ್ಕೃತ ಜ್ಞಾನವನ್ನು ಲೂಟಿ ಮಾಡಿ ಹೋದ್ರು. ವೈಮಾನಿಕ ಶಾಸ್ತ್ರ, ಅರೋಗ್ಯ ವಿಜ್ಞಾನ, ಅಣುಶಕ್ತಿ ಗ್ರಂಥಗಳು ಮತ್ತೆನೆನ್ನೆಲ್ಲಾ ಕಳ್ತನ ಮಾಡದ್ರೋ ಗೊತ್ತಿಲ್ಲಾ. ಇವಾಗ ತಮ್ಮ ಹೆಸರಿನಲ್ಲಿ ಪರಿಶೋದನೆಗಳನ್ನು ನೋಂದಾಯಿಸಿಕೊಂಡಿದ್ದಾರೆ. ಭಾರತದಲ್ಲಿ ಮೊದಲು ವಿಮಾನ ಹಾರಿಸಿದವರು ಶಿವಕರ್ ಬಾಪೂಜಿ ತಲ್ಪಡೆ ಇವರು ೧೮೯೫ರಲ್ಲಿ ಮೊದಲ ಚಾಲಕನಿಲ್ಲದ ವಿಮಾನವನ್ನು ಹಾರಿಸಿತೊರಿಸಿದರು. ಮುಂಬೈನಲ್ಲಿ ನಡೆದ ಘಟನೆ ಇದು. ಆಮೇಲೆ ಇ ಸಾಶ್ತ್ರ ವ್ರೈಟ ಬ್ರದರ್ಸ್ ಗೆ ಸೇರಿತು. ನಮ್ಮ ಭಾರತಿಯನ ಹೆಸರನ್ನು ಮುಚ್ಚಿ ಹಾಕಿದರೂ ಈ ಆಂಗ್ಲರು. ಹೀಗೆ ಅದು ಎಸ್ಟು ಮಾಡಿದ್ದಾರೋ. ಸಿಟ್ಟು ಬರಲ್ವಾ ನಿಮಗೆ?


೫. ಸಂವಿಧಾನದಲ್ಲಿ ನೀಡಿರುವ ಮೀಸಲಾತಿಯನ್ನು ಒಂದಿಸ್ಟು ವರ್ಷಗಳ ನಂತರ ನಿಲ್ಲಿಸ ಬೇಕು ಅಂತ ಬರದಿದ್ದ್ರು, ಅದನ್ನು ಇನ್ನು ಮುಂದುವರಸಿಕೊಂಡು ಹೋಗ್ತಿದ್ದಾರಲ್ಲ ಯಾಕೆ? ಜಾತಿಯ ಮೇಲೆ ರಾಜಕಾರಣ ಮಾಡಿ ಜನರನ್ನು ವೊಡೆದು ಜಿವಿಸುತ್ತಿದ್ದಾರಲ್ಲಾ ಈ ಪೊಲಿಟಿಕ್ಸ್ ಪೀಪಲ್” (ರಾಜಕಾರಣಿಗಳು) ಇವರು ಮನುಷ್ಯರಾ? ನಾವು ಯಾಕೆ ದೆವೆಲೋಪಮೆಂಟಲ್ ಪಾಲಿಟಿಕ್ಸ್ ಮಾಡಬಾರದು ? ಹಾಗ್ ಮಾಡಿದ್ರೆ ಸರ್ವೇ ಜನಾ ಸುಖಿನೋಭವಂತುಅಲ್ಲವೇ ? ನಿಮಗೆ ರಾಜಕಾರಣಿಗಳನ್ನು ಕಂಡರೆ ಸಿಟ್ಟು ಬರಲ್ವಾ?


೬. ನಮ್ಮ ದುಡ್ಡು ನಮಗೆ ಕೊಟ್ಟು ಬೆಶ್ ಅನ್ನಿಸಿಕೊಳ್ತಾರೆ ಈ ರಾಜಕಾರಣಿಗಳು, ನಿಮಗೆ ಇದು ಗೊತ್ತಾ? ನಾವು ಗೊವೆರ್ನ್ಮೆಂಟ್ಗೆ ಟ್ಯಾಕ್ಸ್ ಕಟ್ಥಿವಿ. ಸರ್ಕಾರ ಮತ್ತು ರಾಜಕಾರಣಿಗಳು ಅದನ್ನು ದೇಶದ ಅಭಿವೃದ್ದಿಗೆ ಬಳಸಿಕೊಳ್ಳದೆ, ತಮ್ಮ ಖಜಾನೆ ತುಂಬಿ ಕೊಳ್ತಾರೆ. ಯಾವುದಾದರು ಮಠಗಳು, ಧರ್ಮ ಸಂಘಟನೆಗಳು ಸಾಮೊಹಿಕ ಪೂಜೆ, ಮದುವೆಗಳನ್ನು ಮಾಡಿಸ್ತಿವಿ ಅಂತ ಬಂದ್ರೆ, ದುಡ್ಡು ಕೊಟ್ಟು ತಾವು ಬೆಶ್ ಅನ್ಸಿಕೊಳ್ತಾರೆ? ಕೊಟ್ಟಿದ್ದು ತಮ್ ದುಡ್ಡಾ?


೭. ಯಾವುದಾದ್ರು ಗವರ್ನಮೆಂಟ್ ಆಫಿಸ್ಗೆ ಹೋದ್ರೆ ಸುಲಭವಾಗಿ ಕೆಲಸಗಳು ಆಗ್ತವಾ? ಚಪ್ಪಲಿ ಹರ್ದುಹೋಗ್ತವೆ ಹೊರತು ಕೆಲಸ ಆಗಲ್ಲ. ಬರ್ತ್ ಸೆರ್ಟಿಫಿಕೆಟ್ಯಿಂದ ಹಿಡಿದು, ಡೆಥ್ ಸೆರ್ಟಿಫಿಕೆಟ್ ವರೆಗು ಬರೀ ಲಂಚ. ಜೀವನ ಹ್ಯಾಗಮಾಡೋದು ಸ್ವಾಮಿ. ಸಿಟ್ಟು ಬರಲ್ವಾ, ಈ ಸರ್ಕಾರಿ ಕೆಲಸಗಳ ಬಗ್ಗೆ?


೮. ಸರಿ ಈ ನ್ಯೂಸ್ ಚಾನಲ್ಲು ಗಳನ್ನು ನಂಬೋಣವೆಂದರೆ,  ಪ್ರಜಾತಂತ್ರದ ಇನ್ನೊಂದು ಸ್ತಂಭವೆಂದು ಕರೆಯಲುಪಡುವ ಈ ನ್ಯೂಸ್ ಚಾನಲ್ಗಳು, ಇತ್ತೀಚಿಗೆ ಬಿಸಿನೆಸ್ ಹೌಸ್ಗಳಾಗಿ ಹೋಗಿವೆ. ನೀ ದುಡ್ಡು ಕೊಟ್ಟರೆ ನಿನ್ನ ಪರವಾಗಿ ನ್ಯೂಸ್ ಮಾಡ್ತಿವಿ ಅಂತ, ಸುಳ್ಳು ವಾರ್ತೆಯನ್ನು ಪ್ರಸಾರ ಮಾಡ್ತಾರೆ. ಯಾರನ್ನ ನಂಬೋದು ಸ್ವಾಮಿ ?


೯. ಈ ದೇಶದಲ್ಲಿ ೧೦ ರೂಪಾಯಿಗೆ ಕೋಕಾ-ಕೋಲಾ ಮಾರ್ತಾರೆ, ೧೫ ರೂಪಾಯಿಗೆ ನೀರು ಮಾರ್ತಾರೆ. ಸರಕಾರಗಳ ನೀತಿ ನೋಡಿ. ಸರಿ ಸರ್ಕಾರವನ್ನು ಬಿಟ್ಟು ಬಿಡಿ, ಜನರು ಕೂಡ ೫ ರೂಪಾಯಿ ಕೊಟ್ಟು ರೊಟ್ಟಿ ತಿನ್ನಲ್ಲ, ಆದ್ರೆ ೫೦ ರೂಪಾಯಿ ಕೊಟ್ಟು ಪಿಜ್ಜಾ, ಬರ್ಗರ್ ತಿಂತಾರೆ. ಜನ ಮರುಳೋ, ಜಾತ್ರೆ ಮರಳೋ” ?


ಇಡಿ ದೇಶ ಸುಳ್ಳಿನ ಕಂತೆಗಳ ಮೇಲೆ ಕಟ್ಟಲಾಗಿದೆ, ಇನ್ನು ಹಾಗೆ ಸುಳ್ಳು ಹೇಳ್ಕೊಂಡು, ಸುಳ್ಳಿನ ಬುನಾದಿಯ ಮೇಲೆ ಕಟ್ಟುತ್ತಾ ಹೋಗ್ತಿದ್ದಾರೆ. ಮುಂದಿನ ಪೀಳಿಗೆ ಇದನ್ನು ಪ್ರಶ್ನೆ ಮಾಡದೇ ಇರಲಾರರು. ನಮ್ಮ ದೇಶ ಹೀಗೇಕೆ, ಈ ಸ್ತಿಥಿ ಯಾಕ್ ಬಂತು? ನಾವು ನಮ್ಮಲ್ಲಿ ಅವಲೋಕಿಸಿಕೊಳ್ಳಬೇಕು. ನಮಗೆ ಬರೋ ಸಿಟ್ಟನ್ನು, ಒಳ್ಳೆ ರೀತಿಯಲ್ಲಿ ಉಪಯೋಗಿಸಿ ಎಲ್ಲರನ್ನು ಇದರ ವಿರುಧ ಹೋರಾಡಲು ಪ್ರೆರೆಪಿಸಬೇಕು.  De-Conditioning of Indian brains is required” . ಅದಕ್ಕೆ ನಾನು ಬರಿತ್ತಿದ್ದೇನೆ.


---- ಸುಧೀಂದ್ರ ದೇಸಾಯಿ

Sunday, November 4, 2012

KUKUDMI, REVATI AND EINSTIEN - Circle of Time!

ಕುಕುಡ್ಮಿ , ರೇವತಿ ಮತ್ತು ಐನ್ಸ್ಟೈನ್ -  ಕಾಲಚಕ್ರ!



ಕುಶಸ್ಥಲಿ ಎಂಬ ರಾಜ್ಯ, ಆ ರಾಜ್ಯದ ಅಧಿಪತಿ ಕುಕುಡ್ಮಿ. ಅದು ಒಂದು ದ್ವೀಪ ನಗರಿಯಾಗಿತ್ತು, ಅದೇ ನಗರವು ಮುಂದೆ ದ್ವಾಪರ ಯುಗದಲ್ಲಿ ಕೃಷ್ಣನ ದ್ವಾರಕೆಯಾಗುತ್ತದೆ. “ಕುಕುಡ್ಮಿ” ಯನ್ನು ಪುರಾಣಗಳಲ್ಲಿ ರೈವತ ಎಂಬ ಇನ್ನೊಂದು ಹೆಸರಿನಿಂದಲೂ ಕರೆಯುತ್ತಾರೆ. ಅವನಿಗೆ ಒಬ್ಬಳೇ ಮಗಳು, ಅವಳ ಹೆಸರು “ರೇವತಿ”. ಅವಳು ಪ್ರತಿಭಾವಂತೆ ಹಾಗು ಸುಂದರವಾಗಿದ್ದಳು. ಮಗಳ ಮದುವೆ ಮಾಡಲು ರಾಜ ಕುಕುಡ್ಮಿ ಆಲೋಚಿಸುತ್ತಾನೆ, ಭೂಮಿಯ ಮೇಲೆ ಇರುವ ಎಲ್ಲಾ ರಾಜ್ಯಗಳ ರಾಜರು, ವೀರರು ಹಾಗು ಯೋಗ್ಯ ವ್ಯಕ್ತಿಗಳ ಪಟ್ಟಿಯನ್ನು ಮಾಡಿ, ಇದರಲ್ಲಿ ಯಾರು ಅರ್ಹರು ಎಂಬ ನಿರ್ಧಾರಕ್ಕೆ ಬರಲು ವಿಫಲನಾಗುತ್ತಾನೆ. ಏಕೆಂದರೆ ಯಾರು ಅವನ ಮಗಳನ್ನು ಮೀರಿ ನಿಲ್ಲಲಿಲ್ಲ. ಹೀಗಿರುವಾಗ ತಾನು ಗೊಂದಲಕ್ಕೊಳಗಾಗಿ, ಯಾರನ್ನು ತನ್ನ ಮಗಳ ಗಂಡನೆಂದು ಆರಿಸಲು ವಿಫಲನಾಗುತ್ತಾನೆ. ಸರಿ ಬೇರೆ ಲೋಕಕ್ಕೆಲ್ಲ ತೆರಳಿ ಅಲ್ಲಿ ಯಾರಾದರು ತನ್ನ ಮಗಳಿಗೆ ಯೋಗ್ಯರು ಸಿಗಬಹುದೆಂದು ವಿಮಾನದಲ್ಲಿ ಮಗಳೊಂದಿಗೆ ತೆರಳುತ್ತಾನೆ, ಆದರೆ ಯಾರೂ ಸರಿಹೋಗದಿದ್ದಲ್ಲಿ, ಈ ಮನುಕುಲದ ಸೃಷ್ಟಿಕರ್ತನಾದ ಬ್ರಹ್ಮನನ್ನೇ ಕೆಳಿದರಾಯೀತೆಂದು, ತಾನು ತನ್ನ ಮಗಳೊಡನೆ ಬ್ರಹ್ಮ ಲೋಕಕ್ಕೆ ಪಯಣಿಸುತ್ತಾನೆ. ಆ ಲೋಕ್ಕಕ್ಕೆ ಹೊದ್ಮೇಲೆ ನೋಡುತ್ತಾರೆ, ಬ್ರಹ್ಮನು ಗಂಧರ್ವರ ಸಂಗೀತವನ್ನು ಕೇಳುತ್ತಿರುತ್ತಾನೆ, ಸರಿ ಈ ಸಂಗೀತ ಕಾರ್ಯಕ್ರಮ ಮುಗಿದ ಮೇಲೆ, ಬ್ರಹ್ಮನನ್ನು ಕೇಳೋಣವೆಂದು ಅಲ್ಲೇ ಸ್ವಲ್ಪ ಸಮಯ ಕಾಯುತ್ತಾರೆ. ಸಂಗೀತ ಪ್ರದರ್ಶನ ಮುಗಿದ ಮೇಲೆ, ಬ್ರಹ್ಮನೇ ಇವರನ್ನು ಕಂಡು, ಬಂದ ವಿಷಯವೇನೆಂದು ಕೇಳಲಿಕ್ಕೆ, ಕುಕುಡ್ಮಿ ತಾ ಬಂದ ವಿಚಾರ ಹಾಗು ತಾನಿರುವ ಗೊಂದಲದ ಪರಿಸ್ಥಿತಿಯನ್ನು ಹೇಳಿಕೊಳ್ಳುತ್ತಾನೆ. ಬ್ರಹ್ಮನು ಕುಕುಡ್ಮಿ ಆಯ್ದ ಹೆಸರುಗಳ ಪಟ್ಟಿಯನ್ನು ನೋಡುತ್ತಾ ನಕ್ಕು ಹೀಗೆ ಹೇಳುತ್ತಾನೆ,

ತತ್ ಪುತ್ರ-ಪೌತ್ರ-ನಪತ್ರನಮ್
ಗೊತ್ರಣಿ ಚ್ ನ್ ಶ್ರನ್ಮಹೇ
ಕಲೋ ಭಿಯತಸ್ ತ್ರಿ-ನವ-
ಚತುರ-ಯುಗ-ವಿಕಲ್ಪಿತಃ

ಮೇಲಿನ ಸಂಸ್ಕೃತ್ ಸ್ಲೋಕದಲ್ಲಿ ಬ್ರಹ್ಮ ಹೇಳುವುದೇನೆಂದರೆ “ನೀವು ಎಲ್ಲಾ ಲೋಕವನ್ನು ಸುತ್ತಿ, ಬ್ರಹ್ಮಲೋಕ್ಕಕೆ ಬಂದು ಹಾಗು ಕಾದಿರುವ ತುಸು ಸಮಯದಲ್ಲಿ, ಭೂಮಿಯಮೇಲೆ ಇಪ್ಪತ್ತೆಳು ಚತುರ್ಯುಗಗಳು (~ 42690240000 ದಿನಗಳು) ಕಳೆದು ಹೋಗಿವೆ, ನೀನು ಪಟ್ಟಿ ಮಾಡಿರುವ ಹೆಸರುಗಾಳಗಲಿ, ಅವರ ಮಕ್ಕಳಾಗಲಿ, ಮೊಮ್ಮಕ್ಕಾಳಗಲಿ , ಅವರ ವಂಶಿಕರಾಗಲಿ ಯಾರು ಬದುಕಿಲ್ಲ, ಕಾಲಚಕ್ರದಲ್ಲಿ ಅವರು ಹಾಗು ಅವರ ಹೆಸರು ಅಳಿದು ಹೋಗಿದೆ” ಎಂದೆನ್ನಲು ಕುಕುಡ್ಮಿ ಆಶ್ಚರ್ಯಚಕಿತನಾಗಿ ಕುಸಿದುಹೋಗುತ್ತಾನೆ. ಆದ್ರೆ ಬ್ರಹ್ಮನು ಅವನನ್ನು ಸಾಂತ್ವಾನ ಹೇಳಿ, ನೀನೇನು ಚಿಂತಿಸ ಬೇಡ ಭೂಮಿಯ ಮೇಲೆ ಇನ್ನೇನು ನಿ ಹಿಂತಿರುಗಿದಾಗ ಶ್ರೀ ಮಹಾವಿಷ್ಣು ಕೃಷ್ಣನಾಗಿ ಅವತರವಾಗುತ್ತೆ, ಅವನ ತಮ್ಮ ಬಲರಾಮ ರೇವತಿಗೆ ಯೋಗ್ಯ ವರ, ಹೋಗು ನಿನ್ನ ಮಗಳನ್ನು ಬಲರಾಮನಿಗೆ ಕೊಟ್ಟು ಮದುವೆ ಮಾಡೆಂದು ಹೇಳಿ ಕಳಿಸುತ್ತಾನೆ. ಕುಕುಡ್ಮಿ ಭೂಮಿಗೆ ಹಿಂತಿರುಗಲು, ಇಡಿ ಪೃಥ್ವಿಯ ನಕ್ಷೆ ಬದಲಾಗಿರುತ್ತದೆ. ಮನುಕುಲ ಎಲ್ಲದರಲ್ಲೂ ಕ್ಷಿಣಿಸಿ ಹೋಗಿರುತ್ತದೆ. ಮನುಜ ತನ್ನ ಬುದ್ದಿವಂತಿಕೆಯ ವಿಕಾಸದಲ್ಲಿ ಕೆಳಮಟ್ಟದಲ್ಲಿ ಇರುತ್ತಾನೆ, ಅನ್ಯಾಯ, ರಾಕ್ಷಸತ್ವ ಭೂಮಿಯ ಮೇಲೆ ಜಾಸ್ತಿಯಾಗಿರುತ್ತದೆ. ಸರಿ ಬಲರಾಮನನ್ನು ಕಾಣಲು ಇಬ್ಬರು ನಗರವನ್ನು ಪ್ರವೇಶಿಸಿದಾಗ, ಪ್ರಜೆಗಳು ಇವರನ್ನು ದಿಗಿಲುಗೊಂಡು ನೋಡುತ್ತಿರುತ್ತಾರೆ. ಏಕೆಂದರೆ ಅವರಿರುವ ಗಾತ್ರ, ಉದ್ದ ಅಸಾಧಾರಣವಾಗಿತ್ತು. ಅವರು ಆಗಿನ ಯುಗದ ಮನುಷ್ಯರಿಗಿಂತ ಬಹಳ ಎತ್ತರವಾಗಿದ್ದರು. ಸರಿ ಇನ್ನುಮುಂದೆ ಕೃಷ್ಣನ ಆದೇಶದಂತೆ ಬಲರಾಮ ರೇವತಿಯನ್ನು ಮದುವೆಯಾಗಲು ಒಪ್ಪುತ್ತಾನೆ, ಆದರೆ ಅವಳ ಎತ್ತರ ದೊಡ್ದದಾದರಿಂದ, ತನ್ನ ಆಯುಧ “ಉಳುಮೆ” (plough) ಯೀಂದ, ಅವಳ ತಲೆಗೆ ಕುಕ್ಕುತ್ತಾನೆ, ಅವಾಗ ಅವಳು ಬಲರಾಮನಿಗಿಂತ ಕಡಿಮೆ ಎತ್ತರದಲ್ಲಿ ಕುಗ್ಗುತ್ತಾಳೆ. ಬಲರಾಮ, ರೇವತಿ ಇಬ್ಬರು ಮದುವೆಯಾಗುತ್ತಾರೆ. ನಾವು ಈ ಕಥೆಯನ್ನು ಭಾಗವತದಲ್ಲಿ ಕೇಳಿರುತ್ತೇವೆ. ಈ ಕಥೆಯಿಂದ ನಮಗೆ ತಿಳಿದ ಒಂದು ವಿಷಯವೆಂದರೆ “ಕಾಲ ಆಚಲವಾದ್ದದಲ್ಲ(time is not constant), ಅದು ಬೇರೆ ಬೇರೆ ಆಯಾಮದಲ್ಲಿ ಅದು ಬೇರೆ ಆಗಿರುತ್ತದೆ(it is different in other dimensions)”. ಹಾಗೆ ಅದು ಬೇರೆ ಲೋಕಗಳಲ್ಲಿ, ಬೇರೆ ಬೇರೆ ಗತಿಯಲ್ಲಿ ಚಲಿಸುತ್ತದೆ.


ಈ ಕಥೆ ಏನೂ ನೀವು ಪುರಾಣಗಳಲ್ಲಿ ಕೇಳಿದ್ದಿರಿ, ಆದ್ರೆ ಈ ಟೈಮ್ ಮತ್ತು ಸ್ಪೇಸ್ ಬಗ್ಗೆ ನೀವು ಎಲ್ಲೊ ಓದಿರಬೇಕಲ್ಲಾ? ನೀವು ವಿಜ್ಞಾನದ ವಿಧ್ಯಾರ್ಥಿಯಾಗಿದ್ದಾರೆ ಐನ್ಸ್ಟೈನ್ ತಾತನ ಬಗ್ಗೆಯೆಂತು ಓದಿರುತ್ತೀರ, ಕನಿಸ್ಟ ಪಕ್ಷ ರಿಲೇಟಿವಿಟಿ ಥೆರಿ(theory of relativity) ಆರ್ E=MC2 ಬಗ್ಗೆ ಕೇಳಿರುತ್ತಿರಿ. ಐನ್ಸ್ಟೈನ್ ತಾತನು ಹೇಳಿದ್ದು ಅದೇ, ಆದರೆ ಅದು ವಿಜ್ಞಾನದ ಮೂಲಕ. ಐನ್ಸ್ಟೈನ್ ಏನಾದರು ಈ ಕುಕುಡ್ಮಿ ಮತ್ತು ರೇವತಿ ಕಥೆ ಕೇಳಿದ್ನಾ? ಅವನಿಗೆ ಸಮಯದ ರಹಸ್ಯದ ಬಗ್ಗೆ ತಿಳಿದದ್ದು ಈ ಕಥೆ ಕೇಳಿದ ಮೇಲಾ? ನನ್ನ ಅನುಮಾನವೇನೆಂದರೆ ಪಾಶ್ಚಿಮಾತ್ಯ ವಿಜ್ಞಾನಿಗಳು ಎಲ್ಲೊ ನಮ್ಮ ಪುರಾಣ ಕಥೆಗಳನ್ನು ಕೇಳಿಯೇ ತಮ್ಮ ವಿಜ್ಞಾನ ಸಂಶೋದನೆಯನ್ನು ಮಾಡಿದ್ದಾರಂತ. ಸ್ಟೀಫನ್ ಹಾಕಿಂಗ್(Stephen Hawking) ಕೂಡ ತನ್ನ “ಟ್ವಿನ್ಸ ಪ್ಯಾರಡಾಕ್ಸ್”( ಅವಳಿ ವಿರೋಧಾಭಾಸ ) ವಾದದಲ್ಲಿ ಇದನ್ನೇ ಮಂಡಿಸುತ್ತಾನೆ. ಇಬ್ಬರು ಅವಳಿ ಮಕ್ಕಳು ಒಂದೇ ದಿನ ಹುಟ್ಟಿರುತ್ತವೆ, ಆದರೆ ಒಬ್ಬನು ಭೂಮಿಯ ಮೇಲೆ ವಾಸಮಾಡುತ್ತಿದ್ದಾನೆ ಅಂತ ಇಟ್ಕೊಳ್ಳಿ, ಇನ್ನೊಬ ಒಂದು ಎತ್ತರದ ಪರ್ವತದ ಮೇಲೆ ವಾಸಮಾಡುತ್ತಿದರೆ, ಭೂಮಿಯ ಮೇಲೆ ಇರುವವನ ಆಯುಷ್ಯ, ಪರ್ವತದ ಮೇಲೆ ಇರುವವನಿಗಿಂತ ಹೆಚ್ಚಾಗಿರುತ್ತದೆ. ಇದೆ ಉದಾಹರಣೆ ಕೊಟ್ಟು ಸ್ಟೀಫನ್ ಹಾಕಿಂಗ್ ತನ್ನ ಪುಸ್ತಕ “ಬ್ರಿಫ್ ಹಿಸ್ಟರಿ ಆಫ್ ಟೈಮ್” ನಲ್ಲಿ ವಿವರಿಸುತ್ತಾನೆ. ನಿಮಗೂ ಸಮಯ ಕುಗ್ಗುವುದಾಗಲಿ, ಜಗ್ಗುವುದಾಗಲಿ ಆಗಿದೆಯಾ? ಏನೆ ಅದ್ರು ನಾವು ಕಾಲಕ್ಕೆ ತಕ್ಕಂತೆ ಕುಣಿಯಬೇಕು, ಓಡಬೇಕು. ಕಾಲಚಕ್ರದ ಮಹಿಮೆ ನಿಮಗೆ ತಿಳಿತಾ? ನೀವು ಏನ್ ಹೇಳ್ತಿರಿ?


------ ಸುಧೀಂದ್ರ ದೇಸಾಯಿ